ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧನೆಂದು ಪೇಜಾವರರು ಹೇಳಿದ್ದು ಸ್ವಯಂಪ್ರೇರಿತರಾಗಿ ಅಲ್ಲ. ಪತ್ರಕರ್ತನೊಬ್ಬನ ನೀವು ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಸಮಯೋಚಿತವಾಗಿ ಪೇಜಾವರರು ಆ ರೀತಿ ಉತ್ತರಿಸಿದ್ದಷ್ಟೆ. ದೀಕ್ಷೆ ಪಡೆಯಲು ಕುರುಬರು ಅರ್ಹರಲ್ಲವೆಂದು ಪೇಜಾವರರು ಒಂದೊಮ್ಮೆ ಹೇಳಿದಿದ್ದರೆ ಅದೊಂದು ಮಹಾ ವಿವಾದವಾಗುತಿತ್ತು. ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಿದ ಪೇಜಾವರರನ್ನು ಈಗ ವಾಚಾಮಗೋಚರವಾಗಿ ನಿಂದಿಸಲಾಗುತ್ತಿದೆ. ಬುದ್ಧಿಜೀವಿಗಳ ಅಕ್ರಮ ನಡವಳಿಕೆಗಳಿಗೆ ಸಾಥ್ ನೀಡುವ ಮಾಧ್ಯಮ ಅವರ ಹೇಳಿಕೆಯನ್ನು ತಿರುಚಿ ವರದಿ ಮಾಡಿದ್ದೇ ಇದಕ್ಕೆ ಕಾರಣ. ಪತ್ರಕರ್ತರ ಬೇಜವಾಬ್ದಾರಿಯನ್ನು ಖಂಡಿಸಬೇಕಾಗಿದೆ.
Posted on: Sat, 02 Nov 2013 03:10:42 +0000