Arvind Limbavali and R Ashok BJP Leaders Commotion - TV9 ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ಬೆನ್ನಲ್ಲೇ ಇದೀಗ ನಾಯಕರಲ್ಲಿನ ಅಸಮಾಧಾನವೂ ಸ್ಪೋಟಗೊಂಡಿದೆ. ನಗರದ ಹೆಚ್ಎಎಲ್ ವಿಮಾನ ನಿಲ್ದಾಣ ಬಳಿ ನಡೆದ ಮೋದಿ ಕಾರ್ಯಕ್ರಮದ ವಿಚಾರವಾಗಿ ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಆರ್ ಅಶೋಕ್ ನಡುವೆ ಶೀತಲ ಸಮರ ಶುರುವಾಗಿದೆ. ಸೆಪ್ಟಂಬರ್ 23 ರಂದು ಹೆಚ್ ಎಎಲ್ ವಿಮಾನ ನಿಲ್ದಾಣ ಬಳಿ ನಡೆದ ಮೋದಿ ಕಾರ್ಯಕ್ರಮದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಅಂತಾ ಅರವಿಂದ ಲಿಂಬಾವಳಿ ಮುನಿಸಿಕೊಂಡಿದ್ದಾರೆ. ಶಿಷ್ಟಾಚಾರದನ್ವಯ ಹೆಚ್ಎಎಲ್ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಕಾರ್ಯಕ್ರಮದ ಉಸ್ತುವಾರಿ ನೀಡಬೇಕು. ಆದ್ರೆ, ಮಾಜಿ ಡಿಸಿಎಂ ಆರ್ ಅಶೋಕ್ ಮಾತ್ರ ಸಂಪೂರ್ಣ ಕಾರ್ಯಕ್ರಮದ ಹೊಣೆಯನ್ನು ಹೊತ್ತಿದ್ದಲ್ಲದೆ, ತಮ್ಮನ್ನು ಯಾವುದಕ್ಕೂ ಪರಿಗಣಿಸಿಲ್ಲ ಅಂತಾ ಲಿಂಬಾವಳಿ, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. .......... ಅಷ್ಟೇ ಅಲ್ಲಾ, ಅಶೋಕ್ ವಿರುದ್ಧ ಗರಂ ಆಗಿರೋ ಲಿಂಬಾವಳಿ, ಮೇಯರ್ ಆಯ್ಕೆ ವಿಚಾರವಾಗಿ ತಮ್ಮ ಅಸಮಾಧಾನವನ್ನೂ ಇದೇ ವೇಳೆ ಹೊರಹಾಕಿದ್ದಾರೆ. ಅಶೋಕ್ ಬೆಂಗಳೂರಿನ ಸಂಪೂರ್ಣ ಹಿಡಿತವನ್ನು ತಮ್ಮೊಬ್ಬರಲ್ಲೇ ಇರಿಸಿಕೊಳ್ಳಲು ಹವಣಿಸ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲಾ ಅಂತಲೂ ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೋ ಆರ್ ಅಶೋಕ್, ಪಕ್ಷ ನೀಡಿದ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇನೆ ಅಂತಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಆರಂಭವಾಗಿದೆ.
Posted on: Wed, 01 Oct 2014 13:54:39 +0000