Description: A groom in mysuru attempted sucide after the marraige - TopicsExpress



          

Description: A groom in mysuru attempted sucide after the marraige was called off. 24 year old mahadevswami was to marry 16 year old girl. However, the child welfare department got a complaint from the bride following which they rescued the girl. ಮೈಸೂರಿನಲ್ಲಿ ಮದುವೆ ರದ್ದಾಗಿದ್ದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಲ್ಲಿನ ಕ್ಯಾತಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲೇ ವಿಷಸೇವಿಸಿ ಮಹದೇವಸ್ವಾಮಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಮಹದೇವಸ್ವಾಮಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, 24 ವರ್ಷದ ಮಹದೇವಸ್ವಾಮಿಗೆ 16 ವರ್ಷದ ಬಾಲಕಿ ಜತೆ ಇಂದು ಮತ್ತು ನಾಳೆ ಮೈಸೂರಿನ ಎನ್.ಆರ್.ಮೊಹಲ್ಲಾದ ದೊಡ್ಡತಾಯಮ್ಮ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಆದ್ರೆ ಈ ಮದುವೆ ಬಗ್ಗೆ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಬಾಲಕಿ ಅಪ್ರಾಪ್ತೆಯಾದ್ದರಿಂದ ಮದುವೆ ರದ್ದತಿಗೆ ಸೂಚಿಸಿದ್ದರು. ಹೀಗಾಗಿ ಮದುವೆಯನ್ನು ನಿಲ್ಲಿಸಲಾಗಿತ್ತು. ಇದಕ್ಕೆ ಮನನೊಂದು ವರ ಮಹದೇವಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Posted on: Tue, 11 Nov 2014 14:41:14 +0000

Trending Topics



Recently Viewed Topics




© 2015