ಇವತ್ತು ಮಧ್ಯಾಹ್ನದ ಹೊತ್ತಿಗೆ ಇಲ್ಲೇ ನಮ್ಮ ಮನೆ ಸಮೀಪ ಇರುವ ಸಿಕ್ಖರ ಗುರುದ್ವಾರಕ್ಕೆ ಹೋಗಿದ್ದೆ. ತುಂಬಾ ಸುಂದರವಾದ ಕಟ್ಟಡ, ಕೂದಲು ಕಾಣದಂತೆ ತಲೆಗೆ ಬಟ್ಟೆ ಕಟ್ಟಿ ಹೋಗಬೇಕೆಂಬ ನಿಯಮ. ಒಳಗೆ ಹೋದ್ರೆ ವಿಶಾಲವಾದ ಪೂಜಾ ಸ್ಥಳ, ನಿರಂತರ ಗುರುನಾನಕ್ ಅವರ ಭಜನೆ. ಮುಗಿಸಿ ಕೆಳಗಿನ ಕಟ್ಟಡಕ್ಕೆ ಬಂದ್ರೆ ಅಲ್ಲಿ ಎಲ್ಲರಿಗೂ ಪ್ರಸಾದ ವಿತರಿಸುವ ಜಾಗೆ. ಸುತ್ತ ಗೋಡೆಯಮೇಲೆ ನೋಡಿದ್ರೆ ನೂರಾರುಜನರ photoಗಳನ್ನು ಹಾಕಲಾಗಿದೆ. ಹಾಗೆಯೇ ನೋಡ್ತಾ ಬಂದ್ರೆ ಒಂದಷ್ಟು ಜನ ಕೈಯಲ್ಲಿ Gun ಹಿಡಿದವರ photo ಕಾಣಿಸ್ತು. ಆಮೇಲೆ ಗೊತ್ತಾಯ್ತು ಅವರೆಲ್ಲ ಭಾರತವನ್ನು ಒಡೆದು ಪ್ರತ್ಯೇಕ ಪಂಜಾಬ್ ದೇಶ ಕಟ್ಟಲು ಜೀವ ಬಿಟ್ಟ ಭಯೋತ್ಪಾದಕರು ಅಂತ. ಅದು ಗೊತ್ತಾದ ಮೇಲೆ ಅಲ್ಲಿ ಹೆಚ್ಚು ಹೊತ್ತು ನಿಲ್ಲುವ ಮನಸ್ಸಾಗಲಿಲ್ಲ. ಆ ಭಯೋತ್ಪಾದಕರನ್ನು ದೊಡ್ಡ ಹೀರೋಗಳಂತೆ ಬಿಂಬಿಸಲಾಗಿದೆ. ಅಂದಿನ ದೇಶ ಒಡೆಯುವ ಹೋರಾಟಕ್ಕೆ ಇಲ್ಲಿಂದ (England ನಿಂದ) ಸಾಕಷ್ಟು ಹಣ ಸಹಾಯ ಮಾಡಲಾಗಿತ್ತು, ಮಾನಸಿಕ ಬೆಂಬಲವನ್ನು ಒದಗಿಸಲಾಗಿತ್ತು. ಹೀಗಾಗಿ ದೇಶ ಒಡೆಯುವ ಸಂಚಿನಲ್ಲಿ ಇವರೆಲ್ಲರೂ ಸಮಾನ ಪಾಲುದಾರರು. ಇವತ್ತು ಗುರುಗಳ ಮೇಲಿನ ನಮ್ಮ ನಂಬಿಕೆಯನ್ನು ಒಡೆಯುವ ವ್ಯವಸ್ತಿತ ಸಂಚು ನಡೀತಾ ಇದೆ. ಇದರಲ್ಲೂ ಸುಳ್ಳು complaint ಕೊಟ್ಟವರು ಮಾತ್ರವಲ್ಲ, ಅವರಿಗೆ ಆರ್ಥಿಕ, ನೈತಿಕ ಬೆಂಬಲ ಕೊಟ್ಟವರೂ ಅಷ್ಟೇ ಪಾಲುದಾರರು. ಅಂದು ದೇಶ ಒಡೆಯುವ ಸಂಚೂ ವಿಫಲವಾಯ್ತು, ಇಂದು ಈ ಸಂಚೂ ಹೆಚ್ಚುದಿನ ನಡೆಯುವುದಿಲ್ಲ.
Posted on: Sun, 07 Dec 2014 03:56:31 +0000
Trending Topics
Recently Viewed Topics
© 2015