ಈ ಬಾರಿಯ ಹೊಸ ವರ್ಷವನ್ನು - TopicsExpress



          

ಈ ಬಾರಿಯ ಹೊಸ ವರ್ಷವನ್ನು ಸೋಲಿಗರ ಹಾಡಿಯಲ್ಲಿ ಆಚರಿಸಿಕೊಳ್ಳುವುದಾಗ ಸಮಾಜ ಕಲ್ಯಾಣ ಅಚಿವ ಹೆಚ್.ಆಂಜನೇಯ ಹೇಳಿದ್ದಾರೆ. ಬೆಂಗಳೂರಿನ ದೇವರಾಜು ಅರಸ್ ಭವನದಲ್ಲಿ ಮಾತನಾಡಿದ ಅವರು ಸೋಲಿಗರ ಸಮಸ್ಯೆ ಅರಿಯಲು ಡಿಸೆಂಬರ್ 31 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಗೊಂಬೆಗಲ್ಲು ಕೆರೆ ದಿಂಬ ಎಂಬ ಹಾಡಿಗೆ ತೆರಳಲಿದ್ದೇನೆ ಎಂದಿದ್ದಾರೆ. ಜನವರಿ 1 ರ ವರೆಗೆ ಅಲ್ಲೇ ಉಳಿದುಕೊಂಡು ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಕೆರೆ ದಿಂಬದಲ್ಲಿ 30 ಕುಟುಂಬಗಳ 250 ಜನರಿದ್ದು ಇಡೀ ಹಾಡಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅಲ್ಲದೆ ಚಾಮರಾಜನಗರ ಜಿಲ್ಲೆಯಲ್ಲಿ ಇಂತಹ 80 ಹಾಡಿಗಳಿದ್ದು ಅಲ್ಲಿನ ಜನರನ್ನೂ ಭೇಟಿ ಮಾಡುತ್ತೇನೆ ಎಂದರು. ಒಟ್ಟಾರೆ ಹೊಸ ವರ್ಷದ ಪ್ರಯುಕ್ತ ಇಡೀ ಸಮಾಜ ಕಲ್ಯಾಣ ಇಲಾಖೆಯನ್ನೇ ಸೋಲಿಗರ ಹಾಡಿಗೆ ಕರೆದೊಯ್ದು ಅವರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
Posted on: Fri, 26 Dec 2014 05:18:30 +0000

Trending Topics



Recently Viewed Topics




© 2015