ಝಾನ್ಸಿ ರಾಣಿಗೆ ಅವಮಾನ: - TopicsExpress



          

ಝಾನ್ಸಿ ರಾಣಿಗೆ ಅವಮಾನ: ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನೆ.. ಮಂಗಳೂರು : ಸಿಬಿಎಸ್‌ಇ ಪಠ್ಯದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಿ ಅಪಮಾನ ಮಾಡಲಾಗಿದೆ. ಈ ಪಠ್ಯಕ್ರಮವನ್ನು ರದ್ದುಗೊಳಿಸಬೇಕು. ಅಲ್ಲದೆ ಈ ರೀತಿ ಅಪಚಾರವೆಸಗಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಸಮನ್ವಯಕ ಪ್ರಸನ್ನ ಕಾಮತ್, ಓರಿಯಂಟ್ ಬ್ಲಾಕ್‌ಸ್ವಾನ್ ಪ್ರಕಾಶನ ಪ್ರಕಾಶಿಸಿದ ಸಿಬಿಎಸ್‌ಇ 5 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಝಾನ್ಸಿಯನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಿ ಅಪಮಾನ ಮಾಡಲಾಗಿದೆ. ದಿಟ್ಟ ಹೋರಾಟಗಾರ್ತಿಯನ್ನೇ ಈ ರೀತಿ ಅಪಮಾನಿಸಿರುವುದು ಖೇದಕರ. ತಪ್ಪಿತಸ್ತರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು. ರಾಣಿಯ ಜೀವನದಲ್ಲಿ ಎಲ್ಲಿಯೂ ಹುಕ್ಕಾ ಸೇವನೆ ಮಾಡಿರುವ ಉಲ್ಲೇಖ ಇತಿಹಾಸದಲ್ಲಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರಕಾರ ಉದ್ದೇಶಪೂರ್ವಕವಾಗಿ ಹುಕ್ಕಾ ಸೇವನೆ ಮಾಡಿದ ಚಿತ್ರ ಹಾಕಲಾಗಿದೆ. ಇನ್ನೊಂದೆಡೆ ರಾಹುಲ್ ಗಾಂಧಿಯನ್ನು ಮಾನವೀಯತೆ ಮತ್ತು ದೂರದರ್ಶಿತ್ವ ಗುಣವುಳ್ಳ ದೇಶದಭಾವೀ ನಾಯಕ ಎಂಬಂತೆ ಬಿಂಬಿಸಿ ರಾಹುಲ್ ಗಾಂಧಿಯ ಪಾಠವನ್ನು ಅಳವಡಿಸಲಾಗಿದೆ. ಕಾಂಗ್ರೆಸ್ ಪಠ್ಯಕ್ರಮ ಮಂಡಳಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಸಮಾಜ ಇದನ್ನು ಒಕ್ಕೊರಳಿನಿಂದ ವಿರೋಧಿಸಬೇಕು ಎಂದವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ರಮಾನಂದ ಗೌಡ, ಪ್ರಮುಖರಾದ ಸುಕನ್ಯಾ ಆರ್ಚಾಯ ಮತ್ತಿತರರು ಉಪಸ್ಥಿತರಿದ್ದರು. ~ News 13
Posted on: Mon, 05 Aug 2013 10:05:53 +0000

Trending Topics



Recently Viewed Topics




© 2015