ದೊಂಬ್ರಿ ಬರೆದ saree snatching - TopicsExpress



          

ದೊಂಬ್ರಿ ಬರೆದ saree snatching scene ----------------------------------- Disclaimer : ಈ ಕಥಾನಕದಲ್ಲಿ ಬರುವ ಯಾವುದೇ ಪಾತ್ರಗಳು ಮತ್ತು ಸನ್ನಿವೇಶಗಳು ಪ್ರಚಲಿತ ಮತ್ತು ಪುರಾಣದ ಯಾವುದೇ ಕಥೆ ಮತ್ತು ಪಾತ್ರಗಳಿಗೆ ಸಂಬಂಧಪಟ್ಟಿರುವುದಿಲ್ಲ.. ಇದು ದೊಂಬ್ರಿ ಅಲ್ಲಲ್ಲಿ ಕೇಳಿದ್ದಕ್ಕೆ ಚೂರು ಕಾಲ್ಪನಿಕ ಉಪ್ಪುಖಾರ ಸೇರಿಸಿದ್ದು.. ಅಕಸ್ಮಾತ್ ಯಾವುದಾದ್ರೂ well known characterಗೆ ಸಂಬಂಧಪಟ್ಟಲ್ಲಿ ಅದು ಕೇವಲ ಕಾಕತಾಳಿಯ.. [ಮರುಕ್ಷೇತ್ರದ ಲೀಡ್ ಸೀನ್] ಶರ್ಮರಾಯ ತನ್ನ ಪತ್ನಿ ಸೌಪದಿಯನ್ನ ಟ್ವೆಂಟಿ ಟ್ವೆಂಟಿ ಮ್ಯಾಚಲ್ಲಿ ಬೆಟ್ಸ್ ಕಟ್ಟಿ ಸೋತಿದ್ದಾನೆ...! ಕುಶ್ಯಾಶನ ಅವಳ ಸೀರೆ ಸೆಳೆದು ಸಭಿಕರೆಲ್ಲಾರಿಗೂ ಔಪದಿಯನ್ನು complete ಆ ಥರ ತೋರಿಸಬೇಕು ಅಂತ ಮುಂದೆ ಬಂದ... ಸೌಪದಿ ಭಯದಿಂದ ನಡುಗೋಕೆ ಶುರು ಮಾಡಿದ್ಲು...! (ಸೌಪದಿಯ close zoom build up) ಸನ್ನಿ ಲಿಯೋನ್, ಶಶಾ ಗ್ರೇ ಇತ್ಯಾದಿ ದೇವರ ಫೋಟೋಗಳನ್ನ ಮೊಬೈಲ್ ನಲ್ಲಿ ನೋಡ್ತಾ ಕೂತಿದ್ದ ನೂರಾ ಒಂದು ಜನ ರೌರವರು ಮತ್ತು ಸಭಿಕರೆಲ್ಲಾ ಮೊಬೈಲ್ ಫೋನ್ ಜೇಬಲ್ಲಿ ಇಟ್ಕೊಂಡು ಸೌಪದಿ ಕಡೇನೇ ನೋಡ್ತಾ ಇದ್ರು...! ಅದೆಲ್ಲವನ್ನು ನೋಡಿದ ನಮ್ gentleman ಗೋಕರ್ಣ ಬೇಜಾರಾಗಿ ಏನು ಮಾಡೋದು ಅಂತ ತಲೆ ಕೆರೆದುಕೊಳ್ಳುವಾಗ ಸಿಕ್ಕ ಎರಡು ಹೇನುಗಳನ್ನ ಕುಕ್ಕಿ ಸಾಯಿಸಿ ಪುನಃ ಹೇನು ಸಿಗತ್ತಾ ಅಂತ ಕೆರಕೊಳ್ಳೋವಾಗ ಏನೋ ನೆನಪಾಯ್ತು ಅವನಿಗೆ..!? ಬೆಳಗ್ಗೆ ಗೋಕರ್ಣ ಅರಮನೆಯ ಹಿಂದಿದ್ದ ಕುದುರೆ ಲಾಯದ ಕಡೆ ಹೋದಾಗ ಅಲ್ಲಿ ಕುದುರೆಗೆ ಹುಲ್ಲು ಹಾಕುವ ಮಾಲಿಂಗಪ್ಪ ಗೋಕರ್ಣನ ಮುಂದೆ ಬಂದು : ಬುದ್ದಿ.. ನಂಗೆ ಹಾಕ್ಕೊಳೋಕೆ ಅಂಡರ್ ವೇರ್ ಇಲ್ಲ ಬುದ್ದಿ.. ನಿಮ್ದು ಯಾವ್ದಾದ್ರೂ ಹಳೇ ಅಂಡರ್ ವೇರ್ ಇದ್ರೆ ಕೊಡಿ ಬುದ್ದಿ...! ಅಂತ ಕೇಳ್ಕೊಂಡಿದ್ದ.. ಅವನ ಪರಿಸ್ಥಿತಿ ನೋಡಿ ಮನಸ್ಸಿಗೆ ನೋವಾದ ಗೋಕರ್ಣ ಹೇಳಿದ್ದು : ಲೋ ಮಾಲಿಂಗಪ್ಪ.. ಹಳೇ ಅಂಡರ್ ವೇರ್ ಯಾಕೋ.. ಈಗ ನಾನು ಹಾಕಿರೋದು ನೆನ್ನೆ ಬಿಗ್ ಬಜಾರ್ ನಲ್ಲಿ ಆಫರ್ ಇಟ್ಟಿದ್ದ ಹೊಸಾ ಅಂಡರ್ ವೇರ್.. ನಲವತ್ತು ರೂಪಾಯಿ ಕೊಟ್ಟು ತಗೊಂಡಿದೀನಿ...! ಮಧ್ಯಾನ ಊಟ ಮುಗುಸ್ಕೊಂಡು ಈ ಕಡೆ ಬರೋವಾಗ ಇನ್ನು ಎರಡು ಪೀಸ್ ಇದೆ ಅದನ್ನ ತಗಬಂದು ಕೊಡ್ತೀನಿ ಬಿಡೋ..! ಅಂತ ಗೋಕರ್ಣ ತನ್ನ ಅಂಡರ್ ವೇರನ್ನ ಕುದುರೆ ಮೇಯಿಸೋ ಮಾಹಲಿಂಗಪ್ಪನಿಗೆ ದಾನ ಮಾಡುವ ಕುರಿತು ಆಶ್ವಾಸನೆ ಕೊಟ್ಟದ್ದು ನೆನಪಾಗಿ ಅಲ್ಲಿಂದ ಎದ್ದು ಹೊರಟ..!! [ದಾನ ವೀರ ಶೂರ ಗೋಕರ್ಣ ನೆಡೆದುಕೊಂಡು ಹೋಗುತ್ತಿರುವ ಬ್ಯಾಕ್ shot...!] ಈ ಕಡೆ ವಸ್ತ್ರಾಪಹರಣ ಶುರುವಾಯ್ತು.. ಕುಶ್ಯಾಶನ ಸೌಪದಿಯ ಹತ್ತಿರ ಬಂದು ಅವಳ ಸೆರಗಿಗೆ ಕೈ ಹಾಕಿದ..! (ಶರ್ಮರಾಯ, ಕಲಿಯುಗಭೀಮ, ಅರ್ಜುನ್, ಅಕುಲ್, ಸಗದೇವ ಐದು ಜನರ close shot build up...) ಸೌಪದಿ : ಕ್ರಿಷ್ ಬ್ರೋ...! ಈ ನಿನ್ನ ಸಿಸ್ಟರ್ ಮಾನ ಉಳಿಸು ಬಾ ಬ್ರದರ್.. ಅಂತ ಒಂದು ಕೂಗು ಹಾಕಿದ್ಲು...!! (Build up shots of all characters) ಅರಮನೆಯ ಟೆರೇಸ್ ಮೇಲೆ ultra milds cigarette ಸೇದ್ಕೊಂಡು ಬೆನ್ನು ಕೆರಕೊಂಡು ಅರಮನೆ ಕೆಳಗಡೆ ದಾರೀಲಿ ಹೋಗೋ ಬರೋ ಫಿಗರ್ ಗಳನ್ನ ಬಗ್ಗಿ ಬಗ್ಗಿ ನೋಡ್ಕೊಂಡು ನಿಂತಿದ್ದ ಕೃಷ್ ಸೌಪದಿಯ ಕೂಗು ಕೇಳಿ ಗಾಬರಿಯಾಗಿ ತಾನು ಸೇದ್ತಾ ಇದ್ದ ಸಿಗರೇಟನ್ನ ಬಿಸಾಕಿ, ಕೊಳಲನ್ನ ಒಳಗೆ ಇಟ್ಕೊಂಡ್ ಕೆಳಗಡೆ ಪ್ರತ್ಯಕ್ಷ ಆದ..! ಕುಶ್ಯಾಶನ ಸೌಪದಿಯ ಸೆರಗನ್ನ ಹಿಡಿದು ಎಳಿತಾ ಇದಾನೇ.. ಅದನ್ನ ನೋಡಿ ಕೃಷ್ ತನ್ನ ಕೈ ತೆಗೆದು ಹಸ್ತಸಾಮುದ್ರಿಕಾ ಸಿಂಬಲ್ ತೋರಿಸಿದ.. ಅವನ ಕೈನಿಂದ ಹೊರಟ LED light rays ಸೀದಾ ಸೌಪದಿಯ ಸೀರೆ ಕಡೆ ಹೋಯ್ತು..!! (Long shot ನಲ್ಲಿ) ದಮಕುಶ್ಯಾಶನ ಎಳಿತಾ ಇದಾನೆ.. ಎಳಿತಾ ಇದ್ದಾನೆ... ಎಳಿತಾನೇ ಇದ್ದಾನೆ.. ಸೀರೆ ಎಳಿತಾನೇ ಇದ್ದಾನೆ..! (Round trally shot) ಸೌಪದಿ ಗರಗರ ಅಂತ ತಿರುಗ್ತಾ ಇದ್ದಾಳೆ.. ಅವಳಿಗೆ ತಲೆ ಸುತ್ತು ಬಂದು ದೇಹದ ಮೇಲೆ ನಿಯತ್ರಣ ಕಳೆದುಕೊಂಡು ತಿರುಗಿ ತಿರುಗಿ ತನಗರಿವಿಲ್ಲದೇ ಸೀರೆ ಎಳೆಯೋಕೆ ಕೋ ಆಪರೆಷನ್ ಕೊಡ್ತಾ ಇದ್ದಾಳೆ... ಅವಳ ಮುಖದಲ್ಲಿ ಭಯ.. ಎಲ್ಲಿ ಎಲ್ಲಾರು ಅವಳ ದೇಹದ ಮೇಲಿರೋ Akon tattoo ನೋಡಿಬಿಡ್ತಾರೋ ಅಂತ..!! (ರೌರವರೆಲ್ಲಾ ಜೊಲ್ಲು ಸುರಿಸ್ಕೊಂಡು ನೋಡ್ತಾ ಇರೋ wide and mid shots) ಸೌಪದಿ ತನ್ನ ಐದು ಜನ ಗಂಡಂದಿರ ಕಡೆ ನೋಡ್ತಾಳೆ..! ಎಲ್ರೂ ತಲೆ ತಗ್ಗಿಸ್ಕೊಂಡು OLX ನಲ್ಲಿ sale ಆದ ಹಳೇ ಟೆಡ್ಡಿಬೇರ್ ಥರ ಕೂತಿದ್ದಾರೆ...!! (Five members close shots) ಸೌಪದಿ ಈಗ ತಿರುಗಿ ಕುಶ್ಯಾಶನನ ಕಡೆ ನೋಡ್ತಾಳೆ, ಆ ಲೋಫರ್ ನನ್ ಮಗ ಸೀರೆ ಎಳಿತಾ ಇದ್ದಾನೆ.. ಅದು ಬರ್ತಾನೇ ಇದೆ.. ಸುಸ್ತಾಗಿ ನಾಯಿ ಥರ ನಾಲಿಗೆ ಆಚೆ ಬಿಟ್ಕೊಂಡು ಬೆವರು ಸುರಿಸ್ತಾ ಸೀರೆ ಎಳಿತಾ ಇದ್ದಾನೆ...! (Low angle shot ನಲ್ಲಿ ದುಶ್ಯಾಶನ ಬೆವರು ಸುರಿಸ್ತಾ ಇರೋ ಚಿತ್ರಿಕೆ, ಅದೇ ಫ್ರೇಮ್ ನಲ್ಲಿ ಹಿಂದೆ ಯಾರಿಗೂ ಕಾಣದ ಹಾಗೆ ಸೀಲಿಂಗ್ ಫ್ಯಾನ್ ಮೇಲೆ ನೇತಾಡ್ಕೊಂಡು ಕುಳಿತು ನಗುತ್ತಿರುವ ಕೃಷ್ ಶಾಟ್) ಪಾಪ ಕಕೃಷ್ ಕೊಳಲು ಜಾರಿ ಜಾರಿ ಕೆಳಗೆ ಬೀಳ್ತಾ ಇದೆ.. ಬಿದ್ರೆ ಎಲ್ಲಾರಿಗೂ ಗೊತ್ತಾಗಿಬಿಡತ್ತೆ ಅಂತ ಒಂದು ಕೈನಲ್ಲಿ ಒಳಗೆ ತುರುಕಿಕೊಳ್ತಾ ಇದ್ದಾನೆ.. ಇನ್ನೊಂದು ಕೈ ಯಿಂದ LED light rays ಹೋಗ್ತಾ ಇದೆ..! ಸಹೋದರ ಕುಶ್ಯಾಶನ ಕಷ್ಟ ಪಡೋದನ್ನ ನೋಡಿ ರೌರವೇಶ್ ರವರವ ಕುದೀತಾ ಇದ್ದಾನೆ.. ಸೌಪದಿಯನ್ನ ಟಾಪ್ ಲೆಸ್ ಆಗಿ ನೋಡೋಕೆ ಅಂತ ಮೀಟರ್ ಆನ್ ಮಾಡ್ಕೊಂಡು ಕೂತಿದ್ದ ಸಭಿಕರು ಮತ್ತು ರೌರವ ಸಹೋದರರ ಮೀಟರ್ ಆಫ್ ಆಗ್ತಾ ಇದೆ..! (ಎಲ್ಲರ ಬಿಲ್ಡಪ್ ಶಾಟ್ಸ್) ಕೆಲವರು ತಮ್ಮ ಮೀಟರ್ ಮೈಂಟೇನ್ ಮಾಡೋಕೆ ಪುನಃ ಮೊಬೈಲ್ ಫೋನ್ ತೆಗೆದು ಅದರಲ್ಲಿದ್ದ ಸನ್ನಿ ಲಿಯೋನ್ videos, ಶಶಾ ಗ್ರೇ multi videos, ಮತ್ತು ಕೆಲವರು ಮೈಸೂರು ಮಲ್ಲಿಗೆ ಥರದ ದೇಸಿ ವಿಚಿತ್ರಗಳನ್ನ ನೋಡ್ತಾ ಕೂತ್ಕೊಂಡ್ರು..! ಇನ್ನು ಕೆಲವರು whatsapp ನಲ್ಲಿ ಅರಮನೆಯ ಪರಿಚಾರಿಕೆಯರ ಜೊತೆ ಚಾಟ್ ಮಾಡ್ಕೊಂಡು ಕುಳಿತ್ಕೊಂಡ್ರು..!! (Wide shot ನಲ್ಲಿ ಎಲ್ಲರೂ ಕಂಗೆಟ್ಟವರಂತೆ ಕಾಣುವುದು) ಇದೆಲ್ಲವನ್ನು ಕಂಡ ರೌರವೇಶ್ ಕುಶ್ಯಾಶನನ ಮೇಲೆ ಅಬ್ಬರಿಸಿದ.. ಲೋ ಬೋಸುಡಿಕೆ.. ಬೆಳಗ್ಗೆ ಬೆಳಗ್ಗೆ ದನ ತಿಂದಂಗೆ ಮುವತ್ ಹತ್ತು ಕೇಜಿ ಉಪ್ಪಿಟ್ಟು ತಿಂತೀಯಾ, ಮಧ್ಯಾನ ಒಂದು ಕಂಡಗ ಅನ್ನ ತಿಂತೀಯಾ, ರಾತ್ರಿ ಕೋಳಿಫಾರಂನಲ್ಲಿ ಇರೋಬರೋ ಕೋಳಿಗಳನ್ನೆಲ್ಲಾ ಸುಟ್ಕೊಂಡು ತಿಂತೀಯಾ, ಒಂದೂವರೆ ಲೀಟರ್ ಬ್ಲಾಕ್ ಡಾಗ್ ವಿಸ್ಕಿ ಪೋಟ್ಕಂಡು ಕಾಡೆಮ್ಮೆ ಥರ ಬಿದ್ದಕೊಂಡಿರ್ತೀಯ., ಅದೆಲ್ಲಾನೂ ಕರಗ್ಸಕ್ಕೆ ಅಂತ ದಿನಕ್ಕೆ ಇಬ್ಬಿಬ್ರು ಮೈ ಮೇಲ್ ಬಿದ್ದು ಮಸಾಜ್ ಮಾಡ್ಬೇಕು ನಿಂಗೆ.. ಥೂ ನಿನ್ ಜನ್ಮಕ್ಕೆ...! ಸೀರೆ ಎಳೆದೆಳೆದು ಸುಸ್ತಾಗಿರುವ ಕುಶ್ಯಾಶನನಿಗೆ ಸಹೋದರ ರೌರವ ಅವಾಜ್ ಹಾಕಿದ್ದು ಕೇಳಿ ತಲೆ ಗಿರ್ ಅಂತು, ಕಣ್ಣು ಕತ್ತಲೆ ಕವಿದು ದೊಪ್ಪಂತ redoxide ನೆಲದ ಮೇಲೆ ಬಿದ್ದ..!! ಶರ್ಮರಾಯ, ಕಲಿಯುಗಭೀಮ, ಅರ್ಜುನ್, ಅಕುಲ ಮತ್ತು ಸಗದೇವ ಎಲ್ಲರ ಮುಖದಲ್ಲೂ ದಿಗ್ಭ್ರಾಂತಿ.. ಕ.ಭೀಮನ ಮುಖದಲ್ಲಿ ಕೋಪ..! (ಎಲ್ಲರ Build up shots) ಈ ಕಡೆ ರೌರವನ ಮುಖ ಕೆಂಪಾಗಿದೆ.. ಏನ್ ಮಾತಾಡ್ಬೇಕೋ ಬೇಡ್ವೋ ಗೊತ್ತಾಗದೆ ಸಿಡಿಮಿಡಿ ಅಂತಾ ಇದ್ದಾನೆ.. ಉಳಿದ ತೊಂಬತ್ತೊಂಬತ್ತು ಜನ ಸಹೋದರರು ಮತ್ತು ಸಭಿಕರು ಗಪ್ ಚುಪ್ ಅನ್ನದೇ ಕೂತು ರೌರವನ ಮಾತಿಗೆ ಕಾಯ್ಕೊಂಡ್ ಕೂತಿದ್ದಾರೆ..! (ರೌರವನ build up shots) (ಬಾಂದವರ ಬಿಲ್ಡಪ್) (ಸಭಿಕರ ಬಿಲ್ಡಪ್) ಶ್ರೀ ಕೃಷ್ ಸೀಲಿಂಗ್ ಫ್ಯಾನ್ ಮೇಲೆ ಸೈಲೆಂಟಾಗಿ ಕೂತ್ಕೊಂಡು ಆಗಾಗ ಕೆಳಗೆ ಬೀಳ್ತಾ ಇದ್ದ ಕೊಳಲನ್ನ ಒಳಗೆ ತುರುಕಿಕೊಂಡು ರೌರವ ಏನು ನಿರ್ಧಾರ ಮಾಡಬಹುದು ಅಂತ ಕುತೂಹಲದಿಂದ ನೋಡ್ತಾ ಇದ್ದಾನೆ...! Finally Rouravesh opens his mouth : ಏನ್ ಎಲ್ಲಾ ನನ್ ಮುಖ ನೋಡ್ತಾ ಇದೀರಾ.. ಈ ನನ್ ಮಗ ಕುಶ್ಯಾಶನನ್ನ ನಂಬ್ಕೊಂಡು ಅವಮಾನ ಆಯ್ತು ನಮಗೆಲ್ಲಾ.. ಮುಚ್ಕೊಂಡ್ ಎದ್ದು ಹೋಗಿ ಎಲ್ರೂ.. ಆಮೇಲೆ ಮೀಟ್ ಮಾಡಿ ಮಾತಾಡಣ...! ಎಂದು ಹೇಳಿ ಕೆಳಗೆ ಬಿದ್ದಿದ್ದ ಕುಶ್ಯಾಶನನ ಕಾಲು ಹಿಡ್ಕೊಂಡು ದರದರ ಅಂತ ಬೀದಿ ನಾಯೀಥರ ಎಳ್ಕೊಂಡ್ ಹೋದ..! ಅವನ ಹಿಂದೆಯೇ ಸಭಿಕರೆಲ್ಲಾ ಹೋದ್ರು.. ಅವಮಾನ ತಾಳದ ಬಂಚ್ ಬಾಂದವರು ಒಂದು ನೈಂಟಿ ಹಾಕ್ಕೊಂಡು ಬರೋಣ ಅಂತ ಮಂಜುಶ್ರೀ ಬಾರ್ ಅಂಡ್ ರೆಸ್ಟೋರೆಂಟ್ ಕಡೆ ಹೋದ್ರು.. ಕೃಷ್ ಗೆ ಟೆನ್ಸನ್ ಜಾಸ್ತಿ ಆಗಿ ಒಂದು ಸಿಗರೇಟ್ ಸೇದ್ಕೊಂಡು ಬಂದು ಆಮೇಲೆ ಸೌದಿಯನ್ನ ಸಮಾಧನಾ ಮಾಡಾಣ ಅಂತ ಟೆರೇಸ್ ಮೇಲೆ ಹೋದ..! ಎಲ್ಲಾ ಹೋದ ಮೇಲೆ ಸೌಪದಿ ಅಲ್ಲೇ ನೆಲದ ಮೇಲೆ ಕೂತ್ಕೊಂಡ್ಲು...! ಅವಳ ಕಡೆಯ ಪರಿಚಾರಿಕೆಯರು ಮತ್ತು ಗೆಳತಿಯರು ಅವಳ ಹತ್ರ ಬಂದು ಕೂತ್ಕೊಂಡ್ರು.. ಒಬ್ಬಳು ಹೇಳಿದ್ಲು : ಏನ್ ಅಮ್ಮೋರೆ ಏನು ನೋಡ್ಲಿಲ್ಲ ತಾನೇ ಅವರು...!? ಸೌಪದಿ ಮೌನವಾಗಿ ಕೂತಿದ್ದಾಳೆ.. ಅವಳ ಗೆಳತಿಯರೆಲ್ಲ ಅವಳನ್ನ ನೋಡ್ತಾ ಇದ್ದಾರೆ.. ಗೆಳತಿಯೊಬ್ಬಳು ಸಮಾಧಾನದ ಮಾತು ಆಡಿದ್ಲು : ಲೇಯ್ ಸೌಪು, ಹೋಗ್ಲಿ ಬಿಡೆ.. ಏನಾಯ್ತು ಈಗ.. ನಿನ್ ಗಂಡಂದ್ರು ಕುಡ್ಕೊಂಡ್ ಬರೋಕ್ ಹೋಗಿದ್ದಾರೆ.. ಟೈಟ್ ಆಗಿ ಬಂದ್ರೆ ರೌರವರಿಗೆಲ್ಲಾ ಜಾಡ್ಸಿ ಒದ್ದು ಬುದ್ದಿ ಕಲಿಸ್ತಾರೆ... ಸೌಪದಿ ಮೌನವಾಗಿಯೇ ಕುಳಿತಿದ್ದಾಳೆ.. ಗೆಳತಿಯರಿಗೆ ಗಾಬ್ರಿ.. ಪರಿಚಾರಿಕೆಯೊಬ್ಬಳು ಮಾತಾಡ್ತಾಳೆ.. ಏನಮ್ಮೋರೆ ನೀವು.. ಹಿಂಗ್ ಕೂತ್ಕಂಬಿಟ್ರಿ.. ಅವರೇನೂ ನೋಡಿಲ್ವಲ್ಲ ಬುಡಿ.. ನೀವೇ ಹಿಂಗಾದ್ರೆ ನಾನೇನ್ ಮಾಡಬೇಕು.. ಹೋದ್ ವಾರ ನಾನು ಸ್ನಾನ ಮಾಡಬೇಕಾದ್ರೆ ಮಹಾಮಂತ್ರಿ ಕೋದಂಡಪ್ಪ ಕದ್ದು ವಿಡಿಯೋ ಶೂಟ್ ಮಾಡಿ ಎಲ್ಲಾರಿಗೂ whats app ನಲ್ಲಿ ಕಳಿಸಿದ್ದಾನೆ, ಯೂಟ್ಯೂಬಲ್ಲಿ ಅಪ್ಲೋಡ್ ಮಾಡಿದ್ದಾನೆ.. ಅಷ್ಟಾದ್ರೂ ನಾನು ನಾರ್ಮಲ್ಲಾಗಿದ್ದೀನಲ್ಲ ಅಮ್ಮೋರೆ.. ನನ್ನ ನೋಡಿ ಆದ್ರೂ ನೀವ್ ಸಮಾಧಾನ ಮಾಡ್ಕೋಬೇಕು...! ಸೌಪದಿ ನಗೋಕೆ ಶುರು ಮಾಡಿದ್ಲು.. ಎಲ್ಲರೂ confuse ಆಗಿಬಿಟ್ರು...! ಯಾಕೆ ಏನಾಯ್ತೇ..!? ಅಂತ ಗೆಳತಿಯೊಬ್ಬಳು ಕೇಳಿದ್ಲು.. ಸೌಪದಿ ನಗ್ತಾನೇ ಇದ್ದಾಳೆ... ನಗ್ತಾನೇ ಇದ್ದಾಳೆ.. ಜೋರಾಗಿ ನಗ್ತಾ ಇದ್ದಾಳೆ..!! ಪರಿಚಾರಿಕೆ : ಯಾಕ್ ಅಮ್ಮೋರೆ.. ಏನಾಯ್ತು..? ಗೆಳತಿ : ಏನಾಯ್ತೇ ಸೌಪು.. ಹುಚ್ಚು ಹಿಡ್ಕೋತಾ ನಿಂಗೆ..!? ಸೌಪದಿ ನಗ್ತಾನೇ ಮಾತಾಡ್ತಾಳೆ : ಅಲ್ಲ ಕಣ್ರೇ.. ಆ ಕುಶ್ಯಾಶನ ಎಂಥ ದಡ್ಡ ನನ್ನಮಗ ಅಂತ ನೆನೆಸ್ಕೊಂಡು ನಗ್ತಾ ಇದೀನಿ..! ಗೆಳತಿ : ಯಾಕೆ.. ಅವನೇನು ದಡ್ಡ ಕೆಲಸ ಮಾಡಿದ್ದು..!? ಸೌಪದಿ : ದಡ್ಡ ಅಲ್ದೆ ಮತ್ತಿನ್ನೇನು.. ನಾನು ಉಟ್ಟಿದ್ದು ಸೀರೆ..! ಸೆಲ್ವಾರ್ ಕಮೀಜ್, ಜೀನ್ಸು ಟೀ ಶರ್ಟ್ ಅಲ್ವಲ್ಲ..! ಸೀರೇನಾ ಹಿಡ್ಕೊಂಡು ಎಳೆದು ಎಳೆದು ಸುಸ್ತಾಗಿ ಬಿದ್ದೋದ.. ಬುದ್ಧಿವಂತ ಆಗಿದ್ರೆ ಎಳೆಯೋ ರಿಸ್ಕ್ ತಗೋತಾನೇ ಇರ್ಲಿಲ್ಲ..!! ಮತ್ತೆ ಜೋರಾಗಿ ನಗ್ತಾ ಇದ್ದಾಳೆ...!! [This is a censored Version]
Posted on: Mon, 22 Sep 2014 14:35:32 +0000

Trending Topics



Recently Viewed Topics




© 2015