ಶ್ರೀ ನರೇಂದ್ರ ಮೋದಿ ಅವರ ಉದಾತ್ತತೆ - (ಇಂದು ಪರಮವೀರಚಕ್ರ ವಿಜೇತ ಅಬ್ದುಲ್ ಹಮೀದ್ ಅವರ ೪೯ ನೆ ಪುಣ್ಯತಿಥಿ. ಭಾರತಮಾತೆಯ ಈ ಹೆಮ್ಮೆಯ ಪುತ್ರನಿಗೆ ಕೃತಜ್ಞತಾ/ಶೃದ್ಧಾ ಪೂರ್ವಕ ನಮನಗಳು.) ಇಂದೇ ಒಂದು ಹಳೆಯ ಟ್ವೀಟ್ ಓದುವ ಅವಕಾಶ ಸಿಕ್ಕಿತು. ಅದು ಶ್ರೀ ನರೇಂದ್ರ ಮೋದಿ ಅವರ ೦೯-೧೦-೨೦೧೩ ರ ಟ್ವೀಟ್. ೧೯೬೫ ರ ಯುದ್ಧದಲ್ಲಿ ವೀರಗತಿ ಪಡೆದ ಪರಮವೀರಚಕ್ರ ವಿಜೇತ ಅಬ್ದುಲ್ ಹಮೀದ್ ಅವರ ವಿಧವೆ ರಸೂಲನ್ ಬೀಬಿ ಜಿ ಅವರನ್ನು ಭೇಟಿ ಮಾಡುವ ಗೌರವ ಪ್ರಾಪ್ತವಾಯಿತು ಎಂಥ ಸ್ಫೂರ್ತಿದಾಯಕ, ಪ್ರೇರಣಾದಾಯಕ ಮಾತುಗಳು ! A great tribute and kind gesture from a great leader!! ರೆವಾಡಿಯಲ್ಲಿಯ ಶ್ರೀ ನರೇಂದ್ರ ಮೋದಿಯವರ ಭಾಷಣ ನೋಡಿ ರಸೂಲನ್ ಬೀಬಿ ಮೋದಿ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದರಂತೆ. ಇಬ್ಬರು ಮಕ್ಕಳ ಜತೆ ಉತ್ತರ ಪ್ರದೇಶದ ಘಾಝಿಪುರ್ ದಿಂದ ಗಾಂಧೀನಗರಕ್ಕೆ ಬಂದು ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಇಚ್ಛೆಯನ್ನು ಪೂರೈಸಿಗೊಂಡು, ಮೋದಿ ಅವರನ್ನು ಆಶೀರ್ವದಿಸಿದರು ರಸೂಲನ್ ಬೀಬಿ. ಇಂಥ ಉದಾತ್ತ ನಾಯಕ ಇಂದು ಪ್ರಧಾನಿ ಆಗಿರುವದು ಹೆಮ್ಮೆ ಹಾಗೂ ಸೌಭಾಗ್ಯದ ವಿಷಯ.
Posted on: Wed, 10 Sep 2014 14:28:48 +0000