ಸಾಮಾಜಿಕ ತಾಣಗಳಲ್ಲಿ - TopicsExpress



          

ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾಗಿ ವ್ಯವಸ್ಥಿತವಾಗಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಉಗ್ರ ಜಾಲಿಗರು ಕೆಲಸ ಮಾಡುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇದು ತಪ್ಪಲ್ಲ. ಅವರಿಗೆ ಈ ಹಕ್ಕು ಇದೆ. ಆದರೆ ಈ ಮೋದಿ ಅಭಿಮಾನಿಗಳು ನೇರವಾಗಿ ಚರ್ಚೆಗೆ ಬರುವುದೇ ಇಲ್ಲ. ಬದಲಾಗಿ ಯಾರ ವಿಚಾರವನ್ನು ಪ್ರಸ್ತಾಪಿಸುತ್ತಾರೋ ಆ ವಿಚಾರವನ್ನು ಬಿಟ್ಟು ವಿಚಾರವನ್ನು ಪ್ರಸ್ತಾಪಿಸಿದವರ ಮೇಲೆ ವೈಯಕ್ತಿಕ ಧಾಳಿ ನಡೆಸಲು ಪ್ರಾರಂಭಿಸುತ್ತಾರೆ. ಕೆಟ್ಟಕೆಟ್ಟ ದಾಗಿ ಬೈದು ಸಂದೇಶವನ್ನು ಕಳಿಸುತ್ತಾರೆ. ಮೋದಿಯವರನ್ನು ಈ ದೇಶದ ಜನ ಒಪ್ಪಿಕೊಂಡರೆ ಅವರು ಪ್ರಧಾನಿಯಾಗುತ್ತಾರೆ. ಆದರೆ ವಿಭಿನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳದ ಎಲ್ಲದಕ್ಕೂ ಮೂರನೆಯ ದರ್ಜೆ ಭಾಷೆ ಬಳಸುವ ಉಗ್ರ ಅಭಿಮಾನಿಗಳು ಮೋದಿ ಪ್ರಧಾನಿಯಾದರೆ ಏನೆಲ್ಲ ಮಾಡಬಹುದು ಎಂಬುದು ಚಿಂತೆಗೆ ಕಾರಣವಾಗಿದೆ. ಶ್ರೀರಾಮಚಂದ್ರ ಎಲ್ಲರಿಗೂ ಸದ್ಬುದ್ದಿಯನ್ನು ಕೊಡಲಿ. ಕೇವಲ ದೋಬಿಯಬ್ಬ ಹೇಳಿದ ಎಂಬ ಕಾರಣಕ್ಕೆ ತನ್ನ ಹೆಂಡತಿಯನ್ನೇ ಬಿಟ್ಟವನು ರಾಮ. ಅವನ ಭಕ್ತರು ಜನತಾಂತ್ರಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Posted on: Tue, 05 Nov 2013 03:35:32 +0000

Trending Topics



Recently Viewed Topics




© 2015